ಕಸ್ತೂರಿ ಶ್ರೀನಿವಾಸನ್ (೭ ಆಗಸ್ಟ್ ೧೮೮೭-೨೧ ಜೂನ್ ೧೯೫೯) ಅವರು ಭಾರತೀಯ ಪತ್ರಕರ್ತ ಮತ್ತು ಉದ್ಯಮಿ. ಅವರು ಎಸ್. ಕಸ್ತೂರಿ ರಂಗ ಅಯ್ಯಂಗಾರ್ ಅವರ ಹಿರಿಯ ಮಗ. == ಜೀವನಚರಿತ್ರೆ == ಶ್ರೀನಿವಾಸನ್ ಅವರು ಪ್ರಸಿದ್ಧ ವಕೀಲ ಮತ್ತು ಪತ್ರಕರ್ತರಾದ ಎಸ್. ಕಸ್ತೂರಿ ರಂಗ ಅಯ್ಯಂಗಾರ್ ಅವರಿಗೆ ೧೮೮೭ ಆಗಸ್ಟ್ ನಲ್ಲಿ ಜನಿಸಿದರು. ಅವರು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದರು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಕುಟುಂಬದ ಒಡೆತನದ ದಿ ಹಿಂದೂ ಪತ್ರಿಕೆಗೆ ಸೇರಿದರು. ೧೯೨೩ ರಲ್ಲಿ ಕಸ್ತೂರಿ ರಂಗ ಅಯ್ಯಂಗಾರ್ ಅವರ ನಿಧನದ ನಂತರ ಅವರು ಎಸ್. ರಂಗಸ್ವಾಮಿ ಅಯ್ಯಂಗಾರ್ ಅವರನ್ನು ಮುಖ್ಯ ಸಂಪಾದಕರನ್ನಾಗಿ ಮಾಡಿ ದಿ ಹಿಂದೂ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದರು. ೧೯೩೪ ಫೆಬ್ರವರಿಯಲ್ಲಿ ಶ್ರೀನಿವಾಸನ್ ಮುಖ್ಯ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು. ಅವರು ೧೯೫೯ ಜೂನ್ ೨೧ ರಂದು ತಮ್ಮ ಮರಣದವರೆಗೂ ದಿ ಹಿಂದೂ ಪತ್ರಿಕೆಯನ್ನು ಮುನ್ನಡೆಸಿದರು. ಶ್ರೀನಿವಾಸನ್ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸ್ಥಾಪಕ-ಅಧ್ಯಕ್ಷರಾಗಿದ್ದರು ಮತ್ತು ಅವರಿಗೆ ೧೯೫೬ ರ ಜನವರಿಯಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ೧೯೬೯ರಲ್ಲಿ, ಇವರು ತಿರುಕ್ಕುರಲ್ ಸಂಪೂರ್ಣ ಕೃತಿಯನ್ನು ಪದ್ಯ ರೂಪದಲ್ಲಿ ಇಂಗ್ಲಿಷ್ ಗೆ ಅನುವಾದಿಸಿದರು. ಇವರಿಗೆ ನಾಲ್ಕು ಮಕ್ಕಳಿದ್ದರು-ಇಬ್ಬರು ಪುತ್ರಿಯರು, ಎಸ್. ರಾಧಾ ಮತ್ತು ಎಸ್. ಚಂಪಕವಲ್ಲಿ ಮತ್ತು ಇಬ್ಬರು ಪುತ್ರರು, ಶ್ರೀನಿವಾಸನ್ ಪಾರ್ಥಸಾರಥಿ ಮತ್ತು ಎಸ್. ರಂಗರಾಜನ್, ಇಬ್ಬರೂ ದಿ ಹಿಂದೂ ಪತ್ರಿಕೆಯ ಪ್ರಕಾಶಕರು. ದಿ ಹಿಂದೂ ಪತ್ರಿಕೆಯ ಪ್ರಕಾಶಕರಾಗಿದ್ದ ಪಾರ್ಥಸಾರಥಿ, ತಮ್ಮ ೩೩ನೇ ವಯಸ್ಸಿನಲ್ಲಿ ತಮ್ಮ ತಂದೆಯ ನಿಧನದ ಸ್ವಲ್ಪ ಸಮಯದ ನಂತರ ನಿಧನರಾದರು. ಅವರಿಗೆ ದಿ ಹಿಂದೂ, ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕವಾದ ಸ್ನೇಹಿತರ ವಲಯವಿತ್ತು. ರಂಗರಾಜನ್ ೨೦೦೭ ರಲ್ಲಿ ನಿಧನರಾದರು. == ಉಲ್ಲೇಖಗಳು == " : 22, 1959 . ". . 22 2009. 26 2009.